ಗಣೇಶೋತ್ಸವವು ಯಶಸ್ವಿಯಾಗಲು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ಯೊಂದಿಗೆ ಕೈಜೋಡಿಸಿ!

 ೧. ‘ಗಣೇಶ ಭಕ್ತರೇ, ಶ್ರೀ ಗಣೇಶನ ಪೂಜೆಗೆ ಸಂಬಂಧಿಸಿದ ಕೃತಿಯ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳಿ!
ಇದರ ಕುರಿತು ಸನಾತನ ಸಂಸ್ಥೆಯು ‘ಎ-೪’ ಆಕಾರದ ಕರಪತ್ರವನ್ನು ತಯಾರಿಸಿದೆ. ಅದಕ್ಕೆ ಪ್ರಾಯೋಜಕರಾಗಿ ಹಾಗೂ ಅದರ ವಿತರಣೆ ಮಾಡುವುದು.

೨. ಶ್ರೀ ಗಣಪತಿಯ ಉಪಾಸನೆಯ ವಿಷಯದಲ್ಲಿ ಶಾಸ್ತ್ರೀಯ ಜ್ಞಾನ ನೀಡುವ ೨ ಹಾಗೂ ಪ್ರಬೋಧನಾತ್ಮಕ ವಿಷಯವಿರುವ ೩ ಧರ್ಮಶಿಕ್ಷಣ ಫಲಕಗಳು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ತಯಾರಿಸಿದೆ. ಅಲ್ಲದೇ ಹಿಂದೂ ಜನಜಾಗೃತಿ ಸಮಿತಿಯು ಪ್ರಬೋಧನಾತ್ಮಕ ೧೦ ‘ಹೋರ್ಡಿಂಗ್’ಗಳನ್ನು ಮತ್ತು ೧ ‘ಪೋಸ್ಟರ್’ ತಯಾರಿಸಿದೆ. ಅವುಗಳನ್ನು ಗಣೇಶೋತ್ಸವದ ಸ್ಥಳಗಳಲ್ಲಿ ಪ್ರದರ್ಶಿಸುವುದು
೩. ಶ್ರೀ ಗಣಪತಿಯ ವಿಷಯದಲ್ಲಿ ಪ್ರಶ್ನಮಂಜೂಷಾ ಕಾರ್ಯಕ್ರಮ, ಸಾಮೂಹಿಕ ಅಥರ್ವಶೀರ್ಷ ಪಠಣ, ರಾಷ್ಟ್ರ-ಧರ್ಮದ ಕುರಿತು ಪ್ರವಚನಗಳನ್ನು ಉತ್ಸವದ ಸ್ಥಳದಲ್ಲಿ ಆಯೋಜಿಸುವುದು.
೪. ದೇಶ ಸಂಕಟದಲ್ಲಿರುವಾಗ ಹಾಡು-ಕುಣಿತಗಳ ಮನೋರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು ಭ್ರಷ್ಟಾಚಾರ, ಭಯೋತ್ಪಾದನೆ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ವ್ಯಾಖ್ಯಾನಗಳನ್ನು ಆಯೋಜಿಸುವುದು.
೫. ಯಾವುದಾದರೂ ಗಣೇಶೋತ್ಸವ ಮಂಡಳಿಗಳು ದೇವತೆಗಳನ್ನು ಅವಮಾನಿಸುವ ಅಥವಾ ರಜ-ತಮ ಹೆಚ್ಚಿಸುವ ಸಂಸ್ಕೃತಿಹೀನ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅವುಗಳ ಪದಾಧಿಕಾರಿಗಳಿಗೆ ಪ್ರಬೋಧನೆ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ ಸಾಧಕರನ್ನು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ.
ಸ್ವತಃ ಧರ್ಮಪಾಲನೆ ಮಾಡುವುದು ಮತ್ತು ಸಮಾಜದಿಂದ ಆಗುತ್ತಿರುವ ಧರ್ಮಹಾನಿಯನ್ನು ತಡೆಗಟ್ಟುವುದೇ ಕಾಲಾನುಸಾರ ಆವಶ್ಯಕ ಶ್ರೀ ಗಣೇಶನ ಸಮಷ್ಟಿ ಉಪಾಸನೆಯಾಗಿದೆ.

No comments:

Post a Comment